ಈ ವಾರದ ಹಾಸ್ಯ ಮಿಶ್ರಿತ ಸಾಂಸಾರಿಕ ಚಿತ್ರ "ನಂಜನಗೂಡು ನಂಜುಂಡ" ರಜತ ಪರದೆಯ ಮೇಲೆ ರಾರಾಜಿಸಲಿದ್ದಾನೆ. ಅಮಿತ್ ಪ್ರೊಡಕ್ಷನ್ ಲಾಂಛನದಲ್ಲಿ ಸುಭಾಷ್ ಕೂರ್ಗ್ ಹಾಗೂ ವಿ.ಕೆ. ಜಿಂದಾಲ್ ನಿರ್ಮಿಸಿರುವ "ನಂಜನಗೂಡು ನಂಜುಂಡ", ನಾಯಕ ರವಿಶಂಕರ್ "ಪಯಣ", ಹಿರಿತೆರೆಯಮೇಲೆ ಆರಂಭಿಸಿದ್ದಾರೆ. "ಸಿಲ್ಲಿಲಲ್ಲಿ", ಯಿಂದ ಮನೆ ಮಾತಾಗಿ "ಪಯಣ", ಸಂಗೀತಮಯ ಚಿತ್ರದಿಂದ ಗಮನಕ್ಕೆ ಬಂದಿರುವ ರವಿಶಂಕರ್ಗೆ ಮುದ್ದಾದ ಮಡದಿಯ ಪಾತ್ರದಲ್ಲಿ ಮಲಯಾಳಿ ಭಾಷೆಯ ಹಂಸಿನಿ ಅಭಿನಯಿಸಿದ್ದಾರೆ. ಐದು ಹಾಡುಗಳೊಂದಿಗೆ ರಸವತ್ತಾದ ಹಾಸ್ಯ ಮನಸೂರೆಗೊಳ್ಳುವ ಮನಶಾಸ್ತ್ರ ವಿಚಾರವನ್ನು ಶ್ರೀನಿವಾಸ್ ಪ್ರಸಾದ್ ನಿರ್ದೇಶಿಸಿದ್ದಾರೆ. ಹಾಡುಗಳನ್ನು ಅನೇಕ ಸುಂದರ ತಾಣಗಳಾದ ಮಡಿಕೇರಿ, ಕೆ.ಆರ್.ಸಾಗರ, ಪಾಂಡವಪುರ, ಮೈಸೂರು, ಶ್ರೀರಂಗಪಟ್ಟಣ ಅಲ್ಲದೆ ನೂತನ ಭಾಗವನ್ನು ನಂಜನಗೂಡಿನಲ್ಲಿ ಚಿತ್ರೀಕರಿಸಿದ್ದಾರೆ ಹೆಸರಾಂತ ಛಾಯಾಗ್ರಾಹಕ ಆರ್. ಗಿರಿ.
ಪೌರಾಣಿಕ ಚಿತ್ರ "ಪ್ರಚಂಡ ರಾವಣ", ನಿರ್ದೇಶನದ ನಂತರ ಹಾಸ್ಯದ ಹೊನಲಿಗೆ ತೆರಳಿರುವ ಶ್ರೀನಿವಾಸ್ ಪ್ರಸಾದ್ "ನಂಜನಗೂಡು ನಂಜುಂಡ" ಚಿತ್ರವನ್ನು ಕುಟುಂಬ ಸಮೇತರಾಗಿ ವೀಕ್ಷಿರುವ ಚಿತ್ರ ಎಂದು ಅಭಿಪ್ರಾಯ ಪಡುತ್ತಾರೆ.
ಕೆ.ಎಂ. ಪ್ರಕಾಶ್ ಸಂಕಲನ, ಕೆ.ವಿ. ರವಿಚಂದ್ರ ಸಂಗೀತವಿರುವ ಈ ಚಿತ್ರದಲ್ಲಿ ಜೈ ಜಗದೀಶ್, ಕೆ.ಎಸ್.ಎಲ್. ಸ್ವಾಮಿ, ನಾಗರಾಜ ಕೋಟೆ, ತುಳಸಿ ಶಿವಮಣಿ, ಧರ್ಮ, ಓಂಪ್ರಕಾಶ್ ರಾವ್ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.